ಕಿಟಕಿಯಲ್ಲಿ ಚಂದ್ರ

ಯಾಕೆ ಬಂದೆ
ಯಾಕೆ ನಿಂದೆ
ಕಿಟಕಿಯಲ್ಲಿ ಚಂದಿರ
ಸನ್ನೆ ಮಾಡಿ ಕರೆಯಬೇಡ
ಬೆಣ್ಣೆ ಮಾತಾಡಬೇಡ
ಹೋಗಿ ಬಿಡು ಚಂದಿರ

ಪಕ್ಕದಲ್ಲಿ ಗಂಡನಿರುವ
ತೊಟ್ಟಿಲಲ್ಲಿ ಕಂದನಿರುವ
ಅಕ್ಕಪಕ್ಕ ನೋಡಿಯಾರು
ನೂರು ಕತೆಯ ಕಟ್ಟಿಯಾರು
ಹೋಗಿ ಬಿಡು ಚಂದಿರ

ನಿನ್ನ ನೋಡಿ ಆಶಪಟ್ಟೆ
ಆಶೆಪಟ್ಟು ಭಾಷೆ ಕೊಟ್ಟೆ
ನೆನೆದುದೊಂದು
ನಡೆದುದೊಂದು
ಮೊನ್ನೆಯಂತೆ ನಿನ್ನೆಯಲ್ಲ
ಇಂದು ನಾನು ಕನ್ನೆಯಲ್ಲ
ಹೋಗಿ ಬಿಡು ಚಂದಿರ

ಕಿಟಕಿಯಲ್ಲಿ ನಿಲ್ಲಬೇಡ
ನಿಂದು ನನ್ನ ಕಾಡಬೇಡ
ಬಲ್ಲೆ ನಿನ್ನ ಅಂತರಂಗ
ದಾಟಲಾರೆ ಕಂದರ
ಸೇರಲಾರೆ ಚಂದಿರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೫
Next post ನಿವೇದನೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys